
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನವೇ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಕಾಂಗ್ರೆಸ್ ಮತ್ತು ಎನ್ಸಿಪಿಯ ನಾಲ್ವರು ಶಾಸಕರು ನಿನ್ನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ನ ಕಾಳಿದಾಸ ಕೊಳಂಬಕರ್, ಎನ್ಸಿಪಿಯ ಶಿವೇಂದ್ರ ಸಿನ್ಹ ಬೋಂಸ್ಲೆ, ವೈಭವ್ ಪಿಚಾರ್ಡ್ ಮತ್ತು ಸಂದೀಪ್ ನಾಯಕ್ ಅವರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭಾದ್ಯಕ್ಷ ಹರಿಬಾಬು ಬಾಗಡೆ ಅವರಿಗೆ ಸಲ್ಲಿಸಿದ್ದರು.
ಕಾಂಗ್ರೆಸ್ನ ಕಾಳಿದಾಸ ಕೊಳಂಬಕರ್, ಎನ್ಸಿಪಿಯ ಶಿವೇಂದ್ರ ಸಿನ್ಹ ಬೋಂಸ್ಲೆ, ವೈಭವ್ ಪಿಚಾರ್ಡ್ ಮತ್ತು ಸಂದೀಪ್ ನಾಯಕ್ ಅವರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭಾದ್ಯಕ್ಷ ಹರಿಬಾಬು ಬಾಗಡೆ ಅವರಿಗೆ ಸಲ್ಲಿಸಿದ್ದರು.
ಇಂದು ಬಿಜೆಪಿ ಸೇರ್ಪಡೆಯಾಗಿರುವ ನಾಲ್ವರಿಗೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನೀಡುವ ಸಾಧ್ಯತೆ ಇದೆ.
Comments
Post a Comment